ನಿಮಗೆ ಅಣೆಕಟ್ಟಿನ ಕುರಿತಂತೆ ಯಾವುದಾದರೂ ದೃಷ್ಠಿಕೊನವಿದ್ದಲ್ಲಿ, ಈ ದೃಷ್ಠಿಕೋನವನನು ಪರಾಮರ್ಷಿಸಲು ಅತ್ಯಂತ ಸುಂದರ ತಾಣವಾದ ತುಂಗಭದ್ರ ಅಣೆಕಟ್ಟಿಗೆ ಭೇಟಿ ನೀಡಬಹುದಾಗಿದೆ. ಈ ಅಣೆಕಟ್ಟು ಪ್ರದೇಶವು ಹೊಸಪೇಟೆಗೆ ಅತ್ಯಂತ ಸಮೀಪವಿದ್ದು, ಇದು ಹಂಪಿಯ ವಿಶ್ವ ಪರಂಪರೆಯ ತಾಣವನ್ನು ಹೋಲುವ ಪ್ರವಾಸಿ ಆಕರ್ಷಣೆಯ ಸ್ಥಳವಾಗಿದೆ.
ಹೋಟೆಲ್ ಮಯೂರ ವಿಜಯನಗರ ಘಟಕವು ಅಣೆಕಟ್ಟಿನ ಪಕ್ಕದಲ್ಲಿದೇ ಇದ್ದು, ಅಲ್ಲಿಗೆ ಆಗಮಿಸುವ ಪ್ರಯಾಣಿಕರಿಗೆ ಹಸಿರು ಮತ್ತು ಪ್ರಶಾಂತತೆಯ ವಾತಾವರಣವನ್ನು ನೀಡುತ್ತದೆ. ಈ ಹೋಟೆಲ್ ಘಟಕವು ಒಟ್ಟು 20 ಕೊಠಡಿಗಳನ್ನು ಹೊಂದಿದ್ದು, ಅವುಗಳಲ್ಲಿ 13 ಡಬಲ್ ಬೆಡ್ ರೂಮ್ ಮತ್ತು 7 ಹವಾ ನಿಯಂತ್ರಿತ ಬೆಡ್ ರೂಮ್ಗಳಾಗಿರುತ್ತದೆ. ಇದು ರೆಸ್ಟೋರೆಂಟ್ ಮತ್ತು ಬೀಯರ್ ಪಾರ್ಲರ್ನ್ನು ಹೊಂದಿದ್ದು, ಪ್ರವಾಸಿಗರಿಗೆ ವಾಸ್ತವ್ಯದ ಪರಿಪೂರ್ಣ ಅನುಭವವನ್ನು ನೀಡುತ್ತದೆ.
ಸೂಚನೆ:
ಹೋಟೆಲ್ ಬುಕ್ಕಿಂಗ್ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.