ನೀವು ಬೆಂಗಳೂರಿನವರಾಗಿದ್ದರೆ ಖಂಡಿತವಾಗಿ ಕನಕಪುಕ್ಕೆ ಭೇಟಿ ನೀಡುತ್ತೀರಿ. ಅಲ್ಲಿಂದ, ಅರ್ಕಾವತಿ ಕಾವೇರಿಯೊಂದಿಗೆ ವಿಲೀನಗೊಳ್ಳುವ ಸ್ಥಳವಾದ ಸಂಗಮ ಮತ್ತು ಮೇಕೆದಾಟುವಿಗೆ ಪ್ರವಾಸ ಕೈಗೊಳ್ಳಿ. ಈ ಸ್ಥಳಕ್ಕೆ ಒಂದು ಪೌರಾಣಿಕ ಕಥೆಯಿದೆ– ಕಾವೇರಿ ನದಿಯಿಂದ ಹಾರಿ ಹೋಗಿದೆ ಎಂದು ನಂಬಲಾದ ಮೇಕೆ, ಶಿವನ ವೇಷದಲ್ಲಿತ್ತು.
ಹೋಟೆಲ್ ಮಯೂರ ಸಂಗಮ ಘಟಕವು ಮೇಕೆದಾಟುವಿಗೆ ಸಮೀಪದಲ್ಲಿದೆ. ಈ ಹೋಟೆಲ್ ಘಟಕವು ವಿವಿಧ ರೀತಿಯ ವಸತಿ ವ್ಯವಸ್ಥೆಯನ್ನು ಒದಗಿಸಲಿದ್ದು, 10 ಹವಾ ನಿಯಂತ್ರಿತ ಕೊಠಡಿಗಳು, 04 ಡಬಲ್ ಬೆಡ್ ರೂಮ್ ಮತ್ತು 14 ಹಾಸಿಗೆಗಳನ್ನು ಹೊಂದಿರುವ 01 ವಸತಿ ನಿಲಯವನ್ನು ಹೊಂದಿದೆ.
(English)
ಸೂಚನೆ:
ಹೋಟೆಲ್ ಬುಕ್ಕಿಂಗ್ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.