ಮಾಲಿನ್ಯ ಹಾಗೂ ಅವ್ಯವಸ್ಥೆಯಿಂದ ದೂರು ಉಳಿದಿರುವ ಪ್ರದೇಶವೆಂದರೆ ಮಡಿಕೇರಿ. ಪ್ರಕೃತಿ ಸೌಂದರ್ಯದಿಂದ ಕಂಗೊಳಿಸುವ ಸ್ವರ್ಗದಂತೆ ಭಾಸವಾಗುವುದಲ್ಲದೇ ಪ್ರಕೃತಿಯೊಂದಿಗೆ ನಮ್ಮನ್ನು ಬೆಸೆಯುತ್ತದೆ.
ಯಾವುದೇ ಕಾಲಮಾನದಲ್ಲಿ ಭೇಟಿ ನೀಡಿದರೂ ಉತ್ತಮ ಅನುಭವ ನೀಡುತ್ತದೆ. ದಟ್ಟವಾದ ಅರಣ್ಯದ ಲವ್ಲಿ ಗಿರಿದಾಮದಲ್ಲಿ ಮಡಿಕೇರಿ ನೆಲೆಸಿದ್ದು, ಉತ್ತಮ ಕಾಫೀ ತೋಟ ಮತ್ತು ಆಶ್ವರ್ಯಕರ ಜಲಪಾತವನ್ನೊಳಗೊಂಡ ಮಡಿಕೇರಿಯು ತನ್ನ ಸಾಂಪ್ರದಾಯಕ ರುಚಿಯ ಪಾಕಪದ್ದತಿಯನ್ನು ಹೊಂದಿದೆ. ಕೊಡಗು ಜಿಲ್ಲೆಯ ಆಕರ್ಷಕ ರಾಜಧಾನಿಯಾದಂತಹ ಮಡಿಕೇರಿಯು ಪ್ರಾಚೀನ ಕಾಲದ ಆಕರ್ಷಕ ನೋಟವನ್ನು ಹೊಂದಿದೆ ಹಾಗೂ ರೆಡ್ ರೂಫಡ್ ಗುಂಪು ಸಮುದಾಯ ಮತ್ತು ಉತ್ತಮ ಮಾರುಕಟ್ಟೆಯನ್ನು ಸಹ ಹೊಂದಿದೆ.
ಮಡಿಕೇರಿಯು ಸಾಕಷ್ಟು ಪಿಕ್ನಿಕ್ ಸ್ಥಳಗಳನ್ನು ಒದಗಿಸುದಲ್ಲದೇ, ಕೆಲವೊಂದು ಆಸಕ್ತÀ ಚಟುವಟಿಕೆಗಳಾದ ಟ್ರಕ್ಕಿಂಗ್, ಬೆಟ್ಟ ಹತ್ತುವುದು ಹಾಗೂ ನದಿಯಲ್ಲಿನ ದೋಣಿ ವಿಹಾರ ಇತ್ಯಾದಿಗಳನ್ನು ಸಹ ಒದಗಿಸುತ್ತದೆ.
ಮಡಿಕೇರಿ ಬೆಟ್ಟದ ಅಂಚಿನಲ್ಲಿರುವ ಹೋಟೆಲ್ ಮಯೂರ ವ್ಯಾಲಿ ವ್ಯೂ ಮಡಿಕೇರಿ ಘಟಕವು ಸದರಿ ಸ್ಥಳದ ಆಕರ್ಷಕ ನೋಟವನ್ನು ಸವಿಯಲು ಉತ್ತಮ ಸ್ಥಳವಾಗಿದೆ.
ವ್ಯಾಲಿ ವ್ಯೂ ಮಡಿಕೇರಿ ಹೋಟೆಲ್ ಒಟ್ಟು 36 ಹವಾ ನಿಯಂತ್ರಿತ ಕೊಠಡಿಗಳು ಮತ್ತು ಉತ್ತಮ ದರ್ಜೆಯ ಡಬಲ್ ಬೆಡ್ ಕೊಠಡಿಗಳನ್ನು ಹೊಂದಿದೆ. ಬಾರ್ ವ್ಯವಸ್ಥೆಯನ್ನೊಳಗೊಂಡ ರೆಸ್ಟೋರೆಂಟ್ ಹೊಂದಿದ್ದು, ಕೊಡಗು ಶೈಲಿಯ ಪಾಕಪದ್ಧತಿಯನ್ನು ಅಳವಡಿಸಲಾಗಿರುತ್ತದೆ. ಅಲ್ಲದೇ, ಘಟಕಕ್ಕೆ ಬರುವ ಪ್ರವಾಸಿಗರಿಗೆ ಮಡಿಕೇರಿ ಸುತ್ತಮುತ್ತಲಿನ ಸ್ಥಳ ವೀಕ್ಷಣೆಯ ಸೌಲಭ್ಯವನ್ನು ಹೊಂದಿದ್ದು, ಉತ್ತಮ ಸವಿನೆನಪುಗಳನ್ನು ಕಲೆಹಾಕಬಹುದು.
ಸೂಚನೆ:
ಹೋಟೆಲ್ ಬುಕ್ಕಿಂಗ್ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.