ಮುಂದೆ ನೀವು ಆಶ್ಚರ್ಯ ಪಡುವ ಅದ್ಭುತ ಸ್ಥಳಗಳಿಗೆ ಭೇಟಿ ನೀಡಲು ಇಚ್ಛಿಸುವೀರಾ? ಹಾಗಾದರೆ ನೀವು ಉತ್ತರ ಕರ್ನಾಟಕದಲ್ಲಿ ಗುಹೆಗಳಿಂದ ಕೂಡಿರುವ ಬಾದಾಮಿ ಪ್ರದೇಶಕ್ಕೆ ಭೇಟಿ ನೀಡಬಹುದಾಗಿದೆ. ಈ ಪ್ರದೇಶವು ತುಕ್ಕು–ಕೆಂಪು ಬಂಡೆಯ ಮುಖದಿಂದ ಕೆತ್ತಿದ ಶಿಲಾ ದೇವಾಲಯಗಳ ನೆಲೆಯಾಗಿದೆ. ಈ ಸ್ಮಾರಕಗಳನ್ನು ರಚಿಸಲು ಶ್ರಮಿಸಿದ ಚಾಲುಕ್ಯ ಶಿಲ್ಪಿಗಳ ಅಸಾಧಾರಣ ಕಲಾತ್ಮಕತೆಯೇ ಈ ದೇವಾಲಯಗಳಿಗೆ ಸಾಕ್ಷಿಯಾಗಿದೆ. ಬಾದಾಮಿ ಭಾರತದ ವೈಭವಯುತವಾದ ಭೂತಕಾಲವಾಗಿದ್ದು, 18 ಶಸ್ತ್ರ ಸಜ್ಜಿತ ನಟರಾಜರ 81 ನೃತ್ಯ ಭಂಗಿಗಳನ್ನು, ವಿಷ್ಣುವಿಗೆ ಅರ್ಪಿತವಾದ ದೇವಾಲಯಗಳ ಸುಂದರ ಶಿಲ್ಪಗಳನ್ನು ಹೊಂದಿದೆ.
ಹೋಟೆಲ್ ಮಯೂರ ಚಾಲುಕ್ಯ ಬಾದಾಮಿ ಘಟಕವು ಬಸ್ ನಿಲ್ದಾಣಕ್ಕೆ ಹತ್ತಿರದಲ್ಲಿದ್ದು, ಎರಡು ಬ್ಲಾಕ್ಗಳನ್ನು ಒಳಗೊಂಡಿರುತ್ತದೆ. ಒಂದು ಬ್ಲಾಕ್ನಲ್ಲಿ 10 ಡಬಲ್ ಬೆಡ್ ರೂಮ್ಗಳಿದ್ದು, ಅವುಗಳಲ್ಲಿ 6 ಹವಾನಿಯಂತ್ರಿತ ಡಿಲಕ್ಸ್ ಕೊಠಡಿಗಳು ಮತ್ತು 10 ಹವಾನಿಯಂತ್ರಿತ ಸೆಮಿ ಡಿಲಕ್ಸ್ ಕೊಠಡಿಗಳು ಮತ್ತು ಇನ್ನೊಂದು ಬ್ಲಾಕ್ನಲ್ಲಿ 10 ಹವಾ ರಹಿತ ಕೊಠಡಿಗಳಿದ್ದು, ಅವುಗಳಲ್ಲಿ 04 ಡಬಲ್ ಬೆಡ್ ರೂಮ್ಗಳು ಮತ್ತು 02 ಮೂರು ಬೆಡ್ಗಳ ರೂಮ್ಗಳನ್ನು ಒಳಗೊಂಡಿರುತ್ತದೆ. ಹೋಟೆಲ್ ರೆಸ್ಟೋರೆಂಟ್ ಮತ್ತು ಬೀರ್ ಪಾರ್ಲರ್ಗಳ ವ್ಯವಸ್ಥೆಯನ್ನು ಸಹಾ ಹೊಂದಿರುತ್ತದೆ.
ಸೂಚನೆ:
ಹೋಟೆಲ್ ಬುಕ್ಕಿಂಗ್ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.