ಊಟಿ ಪ್ರದೇಶದ ಸೌಂದರ್ಯವು ಒಂದು ಸಮ್ಮೋಹನ ಅನುಭವವಾಗಿರುತ್ತದೆ. ಮಾನ್ಸೂನ್ ಸಮಯದಲ್ಲಿ ಒಂದು ಮಾಯಾಲೋಕದಂತೆ ರೂಪುಗೊಳ್ಳುವ ಗಿರಿದಾಮವು ಹೆಚ್ಚಿನ ಸಮಯ ಇರುವಂತೆ ಪ್ರೇರೆಪಿಸುತ್ತದೆ.
ಮೈಸೂರಿನಿಂದ ಕೇವಲ 03 ಗಂಟೆಗಳ ಪ್ರಯಾಣವಿರುವ ಊಟಿ ಪ್ರದೇಶವು ತಮಿಳುನಾಡಿನಲ್ಲಿದ್ದು, ರಜಾ ದಿನಗಳನ್ನು ಕಳೆಯುವವರಿಗೆ, ಅಲೆದಾಡಲು ಬಯಸುವವರಿಗೆ ಹಾಗೂ ನಗರ ಜೀವನದಿಂದ ಬೇಸತ್ತು ವಿಶ್ರಾಂತಿ ಪಡೆಯಬಯಸುವವರಿಗೆ ಊಟಿ ಜನಪ್ರಿಯ ಸ್ಥಳವಾಗಿರುತ್ತದೆ. ನೀಲಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿರುವ ಊಟಿ ಪ್ರದೇಶವು ಸುಂದರವಾದ ಸರೋವರ, ಜಲಪಾತ, ವಿಶಾಲವಾದ ಸಸ್ಯ ಉದ್ಯಾನವನ, ಅಚ್ಚಹಸಿರಿನ ಅರಣ್ಯ ಹಾಗೂ ಕಣಿವೆಗಳನ್ನು ಒಳಗೊಂಡಿದೆ.
ಹೋಟೆಲ್ ಮಯೂರ ಸುದರ್ಶನ ಊಟಿ ಘಟಕವು ಸುಂದರವಾದ ಹಸಿರು ಪರಿಸರ ಹೊಂದಿದ ಫರ್ನ್ ಬೆಟ್ಟದಲ್ಲಿದ್ದು, ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಹತ್ತಿರವಿರುತ್ತದೆ. ಹೋಟೆಲ್ನಲ್ಲಿ ಒಟ್ಟು 03 ಮರದ ಕುಟೀರಗಳು, 02 ಹವಾನಿಯಂತ್ರಿತವಲ್ಲದ ಕೊಠಡಿಗಳು ಹಾಗೂ 20 ಹವಾನಿಯಂತ್ರಿತವಲ್ಲದ ಡಿಲೆಕ್ಸ್ ಬೆಡ್ ರೂಮ್ಗಳ ಇರುತ್ತವೆ.
ಅಲ್ಲದೇ, ಉತ್ತಮ ರೆಸ್ಟೋರೆಂಟ್ ಸೌಲಭ್ಯವಿದ್ದು, ಊಟಿ ಶೈಲಿಯ ಪಾಕಪದ್ಧತಿ ಹೊಂದಿರುತ್ತದೆ.
ಮುಂದಿನ ಬಾರಿ ಪ್ರವಾಸ ಕೈಗೊಳ್ಳುವ ಮನಸ್ಸಾದಲ್ಲಿ ಇಲ್ಲಿಗೆ ಭೇಟಿ ನೀಡಬಹುದು.
ಸೂಚನೆ:
ಹೋಟೆಲ್ ಬುಕ್ಕಿಂಗ್ನಲ್ಲಿ ಅನ್ವಯಿಸತಕ್ಕ ಷರತ್ತು ಮತ್ತು ನಿಬಂಧನೆಗಳು:
ದಯವಿಟ್ಟು ಗಮನಿಸಿ: ಬುಕ್ಕಿಂಗ್ನಲ್ಲಿ ಒಮ್ಮೆ ತಿದ್ದುಪಡಿ ಮಾಡಿದ ನಂತರ ಮೊತ್ತೊಮ್ಮೆ ತಿದ್ದಪಡಿ ಮಾಡಲು ಅಥವಾ ರದ್ದುಗೊಳಿಸಲು ಸಾಧ್ಯವಿರುವುದಿಲ್ಲ. ಅಲ್ಲದೇ, ತಿದ್ದುಪಡಿಯು ದಿನಾಂಕ ಮತ್ತು ಕೊಠಡಿಯನ್ನು ಮಾತ್ರ ಒಳಗೊಂಡಿರುವುದಲ್ಲದೇ, ಕೆ.ಎಸ್.ಟಿ.ಡಿ.ಸಿ ಯ ಮಯೂರ ಹೋಟೆಲ್ಗಳಲ್ಲಿ ಬದಲಾವಣೆಯನ್ನು ಮಾಡುವ ಅವಕಾಶವನ್ನು ಹೊಂದಿರುತ್ತದೆ.
ಹೋಟೆಲ್ ಬುಕ್ಕಿಂಗ್ ರದ್ದುಪಡಿಸಲು ಇರುವ ನಿಯಮಗಳು
ಕಾಲೋಚಿತವಲ್ಲದ ಸಂದರ್ಭ ಅಂದರೆ, ಜನವರಿ, ಫೆಬ್ರವರಿ, ಮಾರ್ಚ್, ಜುಲೈ ಹಾಗೂ ಆಗಸ್ಟ್ ಮಾಹೆಗಳಲ್ಲಿ ಬುಕ್ಕಿಂಗ್ ರದ್ದುಪಡಿಸಲು ನಿಯಮಗಳು ಈ ಕೆಳಕಂಡಂತಿರುತ್ತವೆ.